ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ನಗರವಾದ ಮಂಗಳೂರಿನಲ್ಲಿ ಸ್ಥಾಪಿತವಾಗಿರುವ ಪ್ರಮುಖ ಪರಿಸರ-ಶಿಕ್ಷಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಾಗಿದೆ.
ಪಿಲಿಕುಳವು ವೈವಿಧ್ಯಮಯ ವೈಶಿಷ್ಟ್ಯಗಳನ್ನು ಹೊಂದಿರುವ ಸಮಗ್ರ ಥೀಮ್ ಪಾರ್ಕ್, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈಜ್ಞಾನಿಕ ಆಸಕ್ತಿಯ ಅನೇಕ ಆಕರ್ಷಣೆಗಳನ್ನು ಹೊಂದಿದೆ. ಈ ಉದ್ಯಾನವನವು 370 ಎಕರೆ ಪ್ರದೇಶದಲ್ಲಿ ಹರಡಿದೆ. ಯೋಜನೆಯು ಪ್ರಸ್ತುತ ಜೈವಿಕ ಉದ್ಯಾನವನ, ಅರ್ಬೊರೇಟಂ (ಸಸ್ಯಕಾಶಿ), ವಿಜ್ಞಾನ ಕೇಂದ್ರ, ಬೋಟಿಂಗ್ ಕೇಂದ್ರದೊಂದಿಗೆ ಲೇಕ್ ಪಾರ್ಕ್, ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಗಾಲ್ಫ್ ಕೋರ್ಸ್‌ಗಳನ್ನು ಒಳಗೊಂಡಿದೆ. ಹೆರಿಟೇಜ್ ವಿಲೇಜ್, ಆಯುರ್ವೇದ ಹೆಲ್ತ್ ಥೆರಪಿ ಸೆಂಟರ್ ಮತ್ತು ಟೂರಿಸ್ಟ್ ಕಾಟೇಜ್‌ಗಳನ್ನು ಹೊಂದಿದೆ.
ಪಿಲಿಕುಳವು ಭಾರತದಲ್ಲಿ ಈ ರೀತಿಯ ಮೊದಲ ಯೋಜನೆಯಾಗಿದ್ದು ಎಲ್ಲಾ ಆಧುನಿಕ ಮನರಂಜನಾ ಸೌಲಭ್ಯಗಳೊಂದಿಗೆ ಈ ಪ್ರದೇಶದ ಸ್ಥಳೀಯ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಆರೋಗ್ಯಕರ ಅನುಭವವನ್ನು ಒದಗಿಸುವ ಪರಿಕಲ್ಪನೆಯಿಂದ ಪ್ರೇರಿತವಾಗಿದೆ.
ಜಾಗತಿಕವಾಗಿ ಗುರುತಿಸಲ್ಪಟ್ಟಿರುವ 34 ಜೈವಿಕ ವೈವಿಧ್ಯತೆಯ ಹಾಟ್ ಸ್ಪಾಟ್‌ಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಸಮೀಪದಲ್ಲಿರುವ ಪಿಲಿಕುಳದ ಹಲವು ವೈಶಿಷ್ಟ್ಯಗಳು ಈ ಪ್ರದೇಶದ ವಿಶಿಷ್ಟ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಪಿಲಿಕುಳವು ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ಸ್ಥಳೀಯ ಪರಂಪರೆ ಮತ್ತು ಕರಾವಳಿ ಸಂಸ್ಕೃತಿಯನ್ನು ಸಂರಕ್ಷಿಸುವ ಪ್ರಯತ್ನ ಮಾಡುತ್ತಿದೆ.  ಸಂಕ್ಷಿಪ್ತವಾಗಿ ಹೇಳುವುದಾದರೆ, ಪಿಲಿಕುಳವು ಭಾರತದ ಒಂದು ಶೈಕ್ಷಣಿಕ ಮತ್ತು ಮನರಂಜನಾ ತಾಣವಾಗಿದೆ.  ಎಲ್ಲಾ ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.
 ಪಿಲಿಕುಳ...ಹೆಸರೇ ಅದರರ್ಥವನ್ನು ಸೂಚಿಸುತ್ತದೆ. ಬಹಳ ಹಿಂದೆ ಹುಲಿಗಳು ಈ ಸ್ಥಳದಲ್ಲಿರುವ ಕೊಳಕ್ಕೆ ನೀರು ಕುಡಿಯಲು ಬರುತ್ತಿದ್ದವು ಎಂಬ ಪ್ರತೀತಿ ಇತ್ತು. ತುಳು ಭಾಷೆಯಲ್ಲಿ ‘ಪಿಲಿ’ ಎಂದರೆ 'ಹುಲಿ' ಮತ್ತು ‘ಕುಳ’ ಎಂದರೆ 'ಕೊಳ'. ಹಾಗಾಗಿ ಈ ಸ್ಥಳಕ್ಕೆ ಪಿಲಿಕುಳ ಅಂತ ಹೆಸರು ಬಂದಿದೆ. ಪಿಲಿಕುಳ ನಿಸರ್ಗಧಾಮವು, ಆಗಿನ ದ.ಕ.ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಭರತ್ ಲಾಲ್ ಮೀನಾ, ಐಎಎಸ್ ಅವರ ಕನಸಿನ ಕೂಸು. ಕರಾವಳಿ ಕರ್ನಾಟಕದ ಜೈವಿಕ ವೈವಿಧ್ಯತೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಪಿಲಿಕುಳ ನಿಸರ್ಗಧಾಮದ ಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು  18 ವರ್ಷಗಳ ಸೇವೆ ಸಲ್ಲಿಸಿ ಪಿಲಿಕುಳ ನಿಸರ್ಗಧಾಮದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದವರು ಶ್ರೀ ಜೆ.ಆರ್.ಲೋಬೋ, ಕೆ.ಎ.ಎಸ್.
ನಂತರ ಕರ್ನಾಟಕ ಹೈಕೋರ್ಟ್ ಮತ್ತು ಸರ್ಕಾರದ ಆದೇಶದಂತೆ ಪಿಲಿಕುಳ ನಿಸರ್ಗಧಾಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಎಂದು ಮರುನಾಮಕರಣ ಮಾಡಲಾಯಿತು. ಈಗ ಅಸ್ತಿತ್ವದಲ್ಲಿರುವ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಸೊಸೈಟಿ ಮತ್ತು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿಯನ್ನು ವಿಸರ್ಜಿಸಲಾಗಿದೆ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ, 2018 (ಕರ್ನಾಟಕ ಅಧಿನಿಯಮ 2018 ರ ಕರ್ನಾಟಕ ಅಧಿನಿಯಮ ನಂ.09) ಅನ್ನು ರಾಜ್ಯ ಸರ್ಕಾರವು ಅಧಿಸೂಚನೆ ಸಂಖ್ಯೆ. ಸಾಂವ್ಯಾಶಾಇ 08 ಶಾಸನ 2018, ಬೆಂಗಳೂರು, 209.203 ಮತ್ತು ದಿನಾಂಕ 24.12.2019 ರಿಂದ ಇದು ಜಾರಿಗೆ ಬಂದಿರುತ್ತದೆ.
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸರ್ಕಾರದ ಪರವಾಗಿ ಪ್ರಾಧಿಕಾರಕ್ಕೆ ಮೇಲ್ವಿಚಾರಣೆ, ನಿಯಂತ್ರಣ ಮತ್ತು ಪ್ರಾಧಿಕಾರಕ್ಕೆ ನಿರ್ದೇಶನಗಳನ್ನು ನೀಡಲು ನೋಡಲ್ ಇಲಾಖೆಯಾಗಿದೆ.
×
ABOUT DULT ORGANISATIONAL STRUCTURE PROJECTS